ಉಡುಪಿ: ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಕೈ ಅಕ್ಷಯ್ ಮಚೀಂದ್ರ ನೇಮಕಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
ಹಿಂದಿನ ಎಸ್ಪಿ ಎನ್.ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.
ಚಿಕ್ಕಮಗಳೂರು ಎಸ್ಪಿಯಾಗಿದ್ದ ಹಾಕೈ ಅಕ್ಷಯ್ ಮಚೀಂದ್ರ ಅವರು ನೂತನ ಎಸ್ಪಿ ಯಾಗಿ ಸರಕಾರ ಆದೇಶಿಸಿದೆ.
2015 ರಲ್ಲಿ ಐಪಿಎಸ್ ಸೇವೆಗೆ ಅಕ್ಷಯ್ ಮಚೇಂದ್ರ ಸೇರಿದ್ದರು. ಈ ಹಿಂದೆ 2020 ರಲ್ಲಿ ಅಕ್ಷಯ್ ಮಚೇಂದ್ರರನ್ನು ಉಡುಪಿ ಎಸ್ ಪಿ ಆಗಿ ವರ್ಗಾವಣೆ ಮಾಡಿದ್ದ ಸರಕಾರ. ಒಂದೇ ದಿನದಲ್ಲಿ ಆದೇಶದಲ್ಲಿ ಬದಲಾವಣೆ ಮಾಡಿ ಎನ್. ವಿಷ್ಣುವರ್ಧನ್ ರನ್ನು ನೇಮಿಸಿ ಅಂದಿನ ಸರಕಾರ ಆದೇಶ ನೀಡಿದ್ದರು.